This devotional song is dedicated to Guru Dattatreya , who is the reincarnation of Lord Shiva, Lord Vishnu and Lord Brahma , born to Athri Maharishi and Anasuya Devi..
ಅತ್ರಿ ಮಹರ್ಷಿಗಳು ಹಾಗೂ ಅನಸೂಯ ದೇವಿಯ ಪುತ್ರ ಗುರು ದತ್ತಾತ್ರೇಯ– ತ್ರಿಮೂರ್ತಿಗಳಾದ ಬ್ರಹ್ಮ , ವಿಷ್ಣು, ಮಹೇಶ್ವರರ ಅವತಾರ ಎಂಬುದೇ ನಂಬಿಕೆ.. ಈ ಹಾಡು ಡಾಕ್ಟರ್ ರಾಜಕುಮಾರ್ ಅವರು ಹಾಡಿರುವ ಸುಮಧುರ ಭಕ್ತಿಗೀತೆ…
ಬಾಲ ದತ್ತನೆ ಏಳು ಸತ್ಯದತ್ತನೆ ಏಳು
ಅತ್ರಿ ತನಯನೇ ಎಳು ಬೆಳಗಾಯಿತಯ್ಯ||
ಕಮಲಾಸನ ಏಳು, ಕಮಲನಾಭನೆ ಏಳು,
ಕರ ಮುಗಿವೆ ಪರಶಿವನೇ ಎಳು ಏಳಯ್ಯ||
ಬಾಲ ದತ್ತನೆ|
ಉಷೆಯು ಹಾಡುತಿರಲು ಅರುಣರಾಗವನು
ರವಿಯು ಚೆಲ್ಲುತ್ತಿರಲು ಹೊನ್ನ ಕಿರಣವನು|
ಹಿಮದ ತೆರೆ ಮರೆಯಾಗಿ, ಮೊಗ್ಗುಗಳು ಹೂವಾಗಿ, ಪೂಜಿಸಲು ಕಾದಿಹವು ನಿನ್ನ ಪಾದಕಮಲವನು||
ಸುರರು ದರುಶನಕೆಂದು ಓಡೋಡಿ ಬರಲು
ಋಷಿಗಳೆಲ್ಲರು ಕಾಣುವಾಸೆ ಹೊಂದಿರಲು,
ಭಕುತರ ಸಲುವಾಗಿ, ನಾರದರು ಇಂಪಾಗಿ,
ಗಾನ ಮಾಡುತಲಿಹರು ನಿನ್ನ ಮಹಿಮೆಯನು||
ಹೊನ್ನತಾವರೆ ಹಿಡಿದು ಶ್ರೀದೇವಿ ಬರಲು ,
ವಾಗ್ದೇವಿ ಮಲ್ಲಿಗೆಯ ಹೂವು ತಂದಿರಲು , ಪಾರ್ವತಿಯು ಕರದಲಿ ತುಂಬೆ ಹೂಗಳ ಹಿಡಿದು.. ಗುರುದತ್ತಾ ಕೃಪೆ ಮಾಡೋ ಎನ್ನುತಿಹಳು||
ಸೂರ್ಯ ಬೆಳಗಲಿ ನಿನ್ನ ಕಣ್ಣ್ ಬೆಳಕಿನಿಂದ|
ತಾರೆ ಮಿನುಗಲಿ ನಿನ್ನ ಕಣ್ ಬೆಳಕಿನಿಂದ|
ಕರುಣೆ ತುಂಬಿದ ನಿನ್ನ ಕಣ್ಣಿನ ಬೆಳಕಿಂದ|
ಚಂದಿರನ ಕಾಂತಿಯು ಹೊಮ್ಮಬೇಕಯ್ಯ ….||
ಬಾಲ ದತ್ತನೆ ಎಳು ಸತ್ಯದತ್ತನೆ ಏಳು ಅತ್ರಿತನಯನೆ ಏಳು …….
Pingback: Neenu naanu onde enu(ನೀನು ನಾನು ಒಂದೇ ಏನು)lyrics | Life is Marvellous